ಶೀರ್ಷಿಕೆ : ಕೊಪ್ಪಳ ನಗರದಲ್ಲಿ ಬೆಳ್ಳಂಬೆಳಿಗ್ಗೆ ಡಿ.ಸಿ. ಸುನಿಲ್ ಕುಮಾರ್ ಸಂಚಾರ
ಲಿಂಕ್ : ಕೊಪ್ಪಳ ನಗರದಲ್ಲಿ ಬೆಳ್ಳಂಬೆಳಿಗ್ಗೆ ಡಿ.ಸಿ. ಸುನಿಲ್ ಕುಮಾರ್ ಸಂಚಾರ
ಕೊಪ್ಪಳ ನಗರದಲ್ಲಿ ಬೆಳ್ಳಂಬೆಳಿಗ್ಗೆ ಡಿ.ಸಿ. ಸುನಿಲ್ ಕುಮಾರ್ ಸಂಚಾರ
ಕೊಪ್ಪಳ ಆ. 12 (ಕರ್ನಾಟಕ ವಾರ್ತೆ): ಕೊಪ್ಪಳ ನಗರದ ವಿವಿಧ ವಾರ್ಡುಗಳಿಗೆ ಭಾನುವಾರದಂದು ಬೆಳ್ಳಂಬೆಳಿಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು, ಸ್ವಚ್ಛತಾ ಕಾರ್ಯದ ಪರಿಶೀಲನೆ ನಡೆಸಿದರಲ್ಲದೆ, ನಗರದ ಘನತ್ಯಾಜ್ಯ ವಿಲೇವಾರಿಗಾಗಿ ಮೈಕ್ರೋ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ನಗರದಲ್ಲಿ ಭಾನುವಾರದಂದು, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಬೆಳಿಗ್ಗೆ 6 ಗಂಟೆಗೆ ನಗರಸಭೆ ಕಚೇರಿಗೆ ಆಗಮಿಸಿದರು. ಬಳಿಕ ಸ್ವಚ್ಛತಾ ಕಾರ್ಯಕ್ಕೆ ತೆರಳುವ ಎಲ್ಲ ಪೌರಕಾರ್ಮಿಕರು, ಅಧಿಕಾರಿ, ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿದರು. ಪೌರಕಾರ್ಮಿಕರಿಗೆ ಸುರಕ್ಷತಾ ಸಾಧನಗಳ ಸೌಲಭ್ಯ ವಿತರಣೆ, ವೇತನ ಪಾವತಿ, ಇಎಸ್ಐ ಮತ್ತು ಪಿಎಫ್ ಸೌಲಭ್ಯ ನೀಡಿಕೆ ಕುರಿತು ಪರಿಶೀಲಿಸಿದರು. ಪೌರಕಾರ್ಮಿಕರು, ಆರೋಗ್ಯದ ಹಿತದೃಷ್ಟಿಯಿಂದ, ತಪ್ಪದೆ ಸುರಕ್ಷತಾ ಸಾಧನಗಳಾದ ಹ್ಯಾಂಡ್ ಗ್ಲೌಸ್, ಶೂ, ಮಾಸ್ಕ್ ಗಳನ್ನು ಬಳಸಿಯೇ, ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದರು. ಬಳಿಕ ನಗರದ ವಿವಿಧ ವಾರ್ಡ್ಗಳಿಗೆ ತೆರಳಿ, ರಸ್ತೆ ಕಾಮಗಾರಿ, ಚರಂಡಿ ಸ್ವಚ್ಛತೆ, ಕಸ ವಿಲೇವಾರಿ ವ್ಯವಸ್ಥೆ ಕುರಿತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಗರದ ಘನ ತ್ಯಾಜ್ಯ ವಿಲೇವಾರಿಗೆ ಮೈಕ್ರೋ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಹಾಗೂ ಇದಕ್ಕಾಗಿ ಅನುದಾನದ ವ್ಯವಸ್ಥೆ ಮಾಡಿಕೊಳ್ಳಲು ಇರುವ ಮಾರ್ಗಗಳ ಕುರಿತು ಪರಿಶೀಲಿಸುವಂತೆ ತಿಳಿಸಿದರು. ನಗರದಲ್ಲಿ ಕಂದಾಯ ಸಂಗ್ರಹ, ಕರ ವಸೂಲಿ, ಆಸ್ತಿ ಕರ, ನೀರಿನ ಕರ ವಸೂಲಿ ಗುರಿ ಸಾಧನೆ ಕುರಿತು, ವರದಿ ಸಲ್ಲಿಸಬೇಕು. ಕರ ಸಂಗ್ರಹದಲ್ಲಿ ಸುಧಾರಣೆ ಕಂಡುಕೊಳ್ಳಬೇಕು. ಪೌರಕಾರ್ಮಿಕರನ್ನು, ಸ್ವಚ್ಛತೆಯ ಹೆಚ್ಚು ಅಗತ್ಯ ಇರುವ ಕಡೆಗಳಲ್ಲಿ ಹೆಚ್ಚು, ಕಾರ್ಮಿಕರನ್ನು ಹಾಗೂ ಒತ್ತಡ ಕಡಿಮೆ ಇರುವ ಕಡೆಗಳಲ್ಲಿ ಕಡಿಮೆ, ಹೀಗೆ ಕೆಲಸದ ಅಗತ್ಯತೆಗನುಗುಣವಾಗಿ ನೇಮಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ಸ್ವಚ್ಛತಾ ಅಭಿಯಾನ ಕೈಗೊಳ್ಳಿ :
********* ಕೊಪ್ಪಳ ನಗರ ಸ್ವಚ್ಛತೆ ಹಾಗೂ ಸೌಂದರ್ಯಿಕರಣಕ್ಕಾಗಿ ನಗರದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಈ ಅಭಿಯಾನದಲ್ಲಿ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸ್ವಸಹಾಯ ಗುಂಪುಗಳು, ಎನ್ಜಿಒಗಳು, ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ನಾಗರಿಕ ಸಮಿತಿಗಳನ್ನು ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲು ಸೂಚನೆ ನೀಡಿದರು.
ನಗರದಾದ್ಯಂತ ಸಂಚಾರ :
*********ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಳಿಕ ನಗರ ಸಂಚಾರಕ್ಕೆ ತೆರಳಿದರು. ಬಸ್ ಸ್ಟ್ಯಾಂಡ್ ರಸ್ತೆ, ಸಿಂಪಿ ಲಿಂಗಣ್ಣ ರಸ್ತೆ, ಜವಾಹರ ರಸ್ತೆ, ಮಾರ್ಕೆಟ್ ಏರಿಯಾ, ಸಾಲಾರ್ಜಂಗ್ ರಸ್ತೆ, ಗಡಿಯಾರ ಕಂಬ, ಕಾತರಕಿ ರಸ್ತೆ, ಗವಿಮಠ ಹಿಂಭಾಗ, ಕುವೆಂಪು ನಗರ, ಕುಷ್ಟಗಿ ರಸ್ತೆ, ಬಿ.ಟಿ. ಪಾಟೀಲ್ ನಗರ, ತಹಸಿಲ್ ಕಚೇರಿ ರಸ್ತೆ, ಕಿನ್ನಾಳ ರಸ್ತೆ, ಜಿಲ್ಲಾ ಕ್ರೀಡಾಂಗಣ ಹೀಗೆ ನಗರದ ಬಹುತೇಕ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹಾವಳಿ ತಪ್ಪಿಸಿ :
****** ನಗರದಲ್ಲಿ ಬೀದಿ ನಾಯಿಗಳ ಕಾಟ, ಹಂದಿಗಳ ಹಾವಳಿ, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿರುವ ಕುರಿತು ದೂರುಗಳು ಕೇಳಿಬರುತ್ತಿವೆ. ಕೂಡಲೆ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಬೇಕು. ಬಿಡಾಡಿ ದನಗಳು, ಹಂದಿಗಳ ಮಾಲೀಕರು ನಿಗದಿತ ದಿನದ ಒಳಗಾಗಿ ತಮ್ಮ ತಮ್ಮ ದನಗಳು, ಹಂದಿಗಳ ಪಾಲನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಇಲಾಖೆಯ ನಿಯಮಾನುಸಾರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಈ ದಿಸೆಯಲ್ಲಿ ಕೂಡಲೆ ಕಾರ್ಯತತ್ಪರರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕ್ಯಾಂಟೀನ್ಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಲ್ಲದು :
*********** ನಗರದ ವಿವಿಧ ಹೋಟೆಲ್, ಕ್ಯಾಂಟೀನ್ಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಪ್ಲಾಸ್ಟಿಕ್ ಬಳಸಿ, ಇಡ್ಲಿ ತಯಾರಿಸುತ್ತಿರುವುದನ್ನು ಕಂಡರಲ್ಲದೆ, ಪ್ಲಾಸ್ಟಿಕ್ ಬಳಸಿ, ತಯಾರಿಸಲಾದ ಎಲ್ಲ ಆಹಾರ ಸಾಮಗ್ರಿಗಳನ್ನು ವಶಕ್ಕೆ ಪಡೆದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸಿ ಇಡ್ಲಿ ಅಥವಾ ಇತರೆ ಆಹಾರವನ್ನು ತಯಾರಿಸದಂತೆ ಎಚ್ಚರಿಕೆ ನೀಡಿದರು. ಬರುವ ದಿನಗಳಲ್ಲಿ ಹೋಟೆಲ್, ಕ್ಯಾಂಟೀನ್ಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳೊಂದಿಗೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಪೌರಾಯುಕ್ತ ಸುನೀಲ್ ಪಾಟೀಲ್, ಪರಿಸರ ಅಭಿಯಂತರ ಅಶೋಕ್ ಕುಮಾರ ಸಜ್ಜನ ಸೇರಿದಂತೆ ವಿವಿಧ ಅಧಿಕಾರಿ, ಸಿಬ್ಬಂದಿಗಳಿದ್ದರು.
ಹೀಗಾಗಿ ಲೇಖನಗಳು ಕೊಪ್ಪಳ ನಗರದಲ್ಲಿ ಬೆಳ್ಳಂಬೆಳಿಗ್ಗೆ ಡಿ.ಸಿ. ಸುನಿಲ್ ಕುಮಾರ್ ಸಂಚಾರ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ನಗರದಲ್ಲಿ ಬೆಳ್ಳಂಬೆಳಿಗ್ಗೆ ಡಿ.ಸಿ. ಸುನಿಲ್ ಕುಮಾರ್ ಸಂಚಾರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ನಗರದಲ್ಲಿ ಬೆಳ್ಳಂಬೆಳಿಗ್ಗೆ ಡಿ.ಸಿ. ಸುನಿಲ್ ಕುಮಾರ್ ಸಂಚಾರ ಲಿಂಕ್ ವಿಳಾಸ https://dekalungi.blogspot.com/2018/08/blog-post_12.html


0 Response to "ಕೊಪ್ಪಳ ನಗರದಲ್ಲಿ ಬೆಳ್ಳಂಬೆಳಿಗ್ಗೆ ಡಿ.ಸಿ. ಸುನಿಲ್ ಕುಮಾರ್ ಸಂಚಾರ"
ಕಾಮೆಂಟ್ ಪೋಸ್ಟ್ ಮಾಡಿ