ಶೀರ್ಷಿಕೆ : ಮತದಾನಕ್ಕೆ 09 ದಿನ ಮಾತ್ರ ಬಾಕಿ ತಪಾಸಣೆ ತೀವ್ರಗೊಳಿಸಲು ಜಿ.ಪಂ. ಸಿಇಒ ವೆಂಕಟ್ ರಾಜಾ ಸೂಚನೆ
ಲಿಂಕ್ : ಮತದಾನಕ್ಕೆ 09 ದಿನ ಮಾತ್ರ ಬಾಕಿ ತಪಾಸಣೆ ತೀವ್ರಗೊಳಿಸಲು ಜಿ.ಪಂ. ಸಿಇಒ ವೆಂಕಟ್ ರಾಜಾ ಸೂಚನೆ
ಮತದಾನಕ್ಕೆ 09 ದಿನ ಮಾತ್ರ ಬಾಕಿ ತಪಾಸಣೆ ತೀವ್ರಗೊಳಿಸಲು ಜಿ.ಪಂ. ಸಿಇಒ ವೆಂಕಟ್ ರಾಜಾ ಸೂಚನೆ

ಕೊಪ್ಪಳ ಮೇ. 03 (ಕ.ವಾ): ವಿಧಾನಸಭಾ ಚುನಾವಣೆ ನಿಮಿತ್ಯ ಮತದಾನಕ್ಕೆ ಇನ್ನು ಕೇವಲ 09 ದಿನಗಳ ಮಾತ್ರ ಬಾಕಿ ಉಳಿಸಿದ್ದು, ಚೆಕ್ಪೋಸ್ಟ್ಗಳು, ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ತಪಾಸಣೆಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ನೀತಿ ಸಂಹಿತೆ ನಿಗಾ ತಂಡದ ಮುಖ್ಯಸ್ಥರಾಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆ ಸಂಬಂಧ ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ಜರುಗಲಿದೆ. ಮತದಾನಕ್ಕೆ ಇನ್ನು ಕೇವಲ 09 ದಿನಗಳು ಮಾತ್ರ ಬಾಕಿ ಉಳಿದಿದ್ದು, ನೀತಿ ಸಂಹಿತೆ ಪಾಲನೆ ಮೇಲೆ ಅಧಿಕಾರಿಗಳು ನಿಗಾ ವಹಿಸುವುದನ್ನು ಇನ್ನಷ್ಟು ತೀವ್ರಗೊಳಿಸಬೇಕು. ಹಣ, ಸಾಮಗ್ರಿ, ಮದ್ಯ, ಕಾಣಿಕೆ ಹಂಚಿಕೆಗಳಂತಹ ಪ್ರಕರಣಗಳು ಈ ಅವಧಿಯಲ್ಲಿ ಹೆಚ್ಚು ಕಂಡು ಬರುವ ಸಾಧ್ಯತೆಗಳಿದ್ದು, ಅಧಿಕಾರಿಗಳು ಚೆಕ್ಪೋಸ್ಟ್ಗಳಲ್ಲಿ ತಪಾಸಣೆಯನ್ನು ಹೆಚ್ಚು ತೀವ್ರಗೊಳಿಸಬೇಕು. ದೂರುಗಳು ಕೇಳಿ ಬರುವ ಕಡೆಗಳಲ್ಲಿ ಹೆಚ್ಚು ನಿಗಾ ವಹಿಸಬೇಕು. ಸಂಶಯಾಸ್ಪದ ಹಣದ ಸಾಗಾಣಿಕೆ ಅಥವಾ ಸೀರೆ, ಬಟ್ಟೆ, ಸಾಮಗ್ರಿಗಳ ಸಾಗಾಣಿಕೆ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಹೆಚ್ಚು, ಹೆಚ್ಚು ಪತ್ತೆ ಹಚ್ಚಿ, ಎಫ್.ಐ.ಆರ್. ದಾಖಲಿಸಲು ಫ್ಲೈಯಿಂಗ್ ಸ್ಕ್ವಾಡ್ ತಂಡದವರು ಮುಂದಾಗಬೇಕು. ದೂರುಗಳಿಗೆ ತಕ್ಷಣ ಸ್ಪಂದಿಸಿ, ಮಾಹಿತಿ ಕಲೆ ಹಾಕಬೇಕು. ಉಲ್ಲಂಘನೆ ಕಂಡುಬರುವಡೆಗಳಲ್ಲಿ ಹಣ, ಮದ್ಯ ಅಥವಾ ಯಾವುದೇ ಸಾಮಗ್ರಿಗಳಿರಲಿ ಜಪ್ತು ಮಾಡಬೇಕು ಎಂದು ಜಿಲ್ಲಾ ಎಂ.ಸಿ.ಸಿ. ತಂಡದ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಮತದಾನಕ್ಕೆ 09 ದಿನ ಮಾತ್ರ ಬಾಕಿ ತಪಾಸಣೆ ತೀವ್ರಗೊಳಿಸಲು ಜಿ.ಪಂ. ಸಿಇಒ ವೆಂಕಟ್ ರಾಜಾ ಸೂಚನೆ
ಎಲ್ಲಾ ಲೇಖನಗಳು ಆಗಿದೆ ಮತದಾನಕ್ಕೆ 09 ದಿನ ಮಾತ್ರ ಬಾಕಿ ತಪಾಸಣೆ ತೀವ್ರಗೊಳಿಸಲು ಜಿ.ಪಂ. ಸಿಇಒ ವೆಂಕಟ್ ರಾಜಾ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮತದಾನಕ್ಕೆ 09 ದಿನ ಮಾತ್ರ ಬಾಕಿ ತಪಾಸಣೆ ತೀವ್ರಗೊಳಿಸಲು ಜಿ.ಪಂ. ಸಿಇಒ ವೆಂಕಟ್ ರಾಜಾ ಸೂಚನೆ ಲಿಂಕ್ ವಿಳಾಸ https://dekalungi.blogspot.com/2018/05/09.html
0 Response to "ಮತದಾನಕ್ಕೆ 09 ದಿನ ಮಾತ್ರ ಬಾಕಿ ತಪಾಸಣೆ ತೀವ್ರಗೊಳಿಸಲು ಜಿ.ಪಂ. ಸಿಇಒ ವೆಂಕಟ್ ರಾಜಾ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ