ಶೀರ್ಷಿಕೆ : ತುಳುಕಿದ ಸಾಗರ ಮತ್ತು ಅಂಚಿನ ನರಹುಳು
ಲಿಂಕ್ : ತುಳುಕಿದ ಸಾಗರ ಮತ್ತು ಅಂಚಿನ ನರಹುಳು
ತುಳುಕಿದ ಸಾಗರ ಮತ್ತು ಅಂಚಿನ ನರಹುಳು
ಬೆಳಗ್ಗೆ ಪತ್ರಿಕೆ ನೋಡಿದ್ದೇ ಉಚ್ಚಿಲದತ್ತ ಸೈಕಲ್ಲೋಡಿಸಿದೆ (೨೩-೪-೧೮ ಸೈಕಲ್ ಸರ್ಕೀಟ್ ೪೦೧). ಭೂಕಂಪ, ಮಳೆ, ಚಂಡಮಾರುತಗಳ ಪ್ರಭಾವವಿಲ್ಲದೆಯೂ ಸಾಗರಬೋಗುಣಿ ಯಾಕೋ ತುಸು ಅಂಡು ಕುಸುಕಿತ್ತು. ಪರಿಣಾಮವಾಗಿ ಎರಡು ಆವರ್ತಗಳಲ್ಲಿ ತುಳುಕಿದ ಕಡಲು ಎಂದಿನಂತಲ್ಲದೆ ಈ ವಲಯದ ಮೀನುಗಾರಿಕಾ ದಾರಿಯವರೆಗೂ ನೆಲ ನೆಕ್ಕಿತ್ತು. ಆ ಅಗಾಧತೆಯ ಸ್ಪರ್ಷವೂ ಹುಲುಮಾನವ(ಅ?)ವ್ಯವಸ್ಥೆಗೆ ಕುಸಿಯುವ ಅನುಭವವನ್ನೇ ತರುತ್ತದೆ ಎನ್ನುವುದನ್ನು ಕೆಲವು ಕಡೆಗಳಲ್ಲಿ ಕಂಡೆ. ಬಟಪಾಡಿ
ಭೂಶಿರದಲ್ಲಿ ನಾಗರಿಕ ಹಾಳಮೂಳ ಪೇರಿಸಿ ‘ನಾವು’ ಎತ್ತರಿಸಿದ ನೆಲಕ್ಕೆ ಏರಿಬಂದ ಅಲೆಗಳು, ಎಲ್ಲವನ್ನು ಚಂದಕ್ಕೆ ಮರಳ ಸಮಾಧಿಗೊಳಪಡಿಸಿದ್ದವು. ನಮ್ಮ ತ್ರಿವೇಣೀ ಸರೋವರ (ಉಚ್ಚಿಲ, ತಲಪಾಡಿ ಮತ್ತು ಕುಂಜತ್ತೂರು ಹೊಳೆಗಳ ಸಂಗಮ) ಸಮುದ್ರಕ್ಕೆ ತೆರೆದುಕೊಂಡಿರಲಿಲ್ಲ. ಆದರೆ ನಡುವೆ ಇದ್ದ ಮರಳದಂಡೆಯ ಹಸಿರು ಮತ್ತು ಕಸರಾಶಿಯನ್ನಷ್ಟೂ ಉಬ್ಬರದಲೆಗಳು ನಿವಾರಿಸಿ, ಒಪ್ಪಗೊಳಿಸಿತ್ತು. ಹಾಗೇ ಸರೋವರದ ಸಂಪತ್ತಿಗಷ್ಟು ಉಪ್ಪುನೀರು ಬೆರೆತದ್ದೂ ಇರಬಹುದು. ಅದು
ಭೂಶಿರದಲ್ಲಿ ನಾಗರಿಕ ಹಾಳಮೂಳ ಪೇರಿಸಿ ‘ನಾವು’ ಎತ್ತರಿಸಿದ ನೆಲಕ್ಕೆ ಏರಿಬಂದ ಅಲೆಗಳು, ಎಲ್ಲವನ್ನು ಚಂದಕ್ಕೆ ಮರಳ ಸಮಾಧಿಗೊಳಪಡಿಸಿದ್ದವು. ನಮ್ಮ ತ್ರಿವೇಣೀ ಸರೋವರ (ಉಚ್ಚಿಲ, ತಲಪಾಡಿ ಮತ್ತು ಕುಂಜತ್ತೂರು ಹೊಳೆಗಳ ಸಂಗಮ) ಸಮುದ್ರಕ್ಕೆ ತೆರೆದುಕೊಂಡಿರಲಿಲ್ಲ. ಆದರೆ ನಡುವೆ ಇದ್ದ ಮರಳದಂಡೆಯ ಹಸಿರು ಮತ್ತು ಕಸರಾಶಿಯನ್ನಷ್ಟೂ ಉಬ್ಬರದಲೆಗಳು ನಿವಾರಿಸಿ, ಒಪ್ಪಗೊಳಿಸಿತ್ತು. ಹಾಗೇ ಸರೋವರದ ಸಂಪತ್ತಿಗಷ್ಟು ಉಪ್ಪುನೀರು ಬೆರೆತದ್ದೂ ಇರಬಹುದು. ಅದು
ಮೇಲ್ದಂಡೆಯ ಕೃಷಿ, ಜೀವನಕ್ಕೆಲ್ಲ ರಗಳೆ ಕೊಟ್ಟಿರಬಹುದು ಎಂದು ಬರಿದೇ ಊಹಿಸಿದೆ.
ಹೀಗಾಗಿ ಲೇಖನಗಳು ತುಳುಕಿದ ಸಾಗರ ಮತ್ತು ಅಂಚಿನ ನರಹುಳು
ಎಲ್ಲಾ ಲೇಖನಗಳು ಆಗಿದೆ ತುಳುಕಿದ ಸಾಗರ ಮತ್ತು ಅಂಚಿನ ನರಹುಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತುಳುಕಿದ ಸಾಗರ ಮತ್ತು ಅಂಚಿನ ನರಹುಳು ಲಿಂಕ್ ವಿಳಾಸ https://dekalungi.blogspot.com/2018/04/blog-post_150.html
0 Response to "ತುಳುಕಿದ ಸಾಗರ ಮತ್ತು ಅಂಚಿನ ನರಹುಳು"
ಕಾಮೆಂಟ್ ಪೋಸ್ಟ್ ಮಾಡಿ