ಶೀರ್ಷಿಕೆ : ತಾಯಿ ಹಾಲು ಮಗುವಿಗೆ ದ್ರವ ರೂಪದ ಪ್ರೀತಿ : ಡಾ. ಎಸ್.ಬಿ. ದಾನರೆಡ್ಡಿ
ಲಿಂಕ್ : ತಾಯಿ ಹಾಲು ಮಗುವಿಗೆ ದ್ರವ ರೂಪದ ಪ್ರೀತಿ : ಡಾ. ಎಸ್.ಬಿ. ದಾನರೆಡ್ಡಿ
ತಾಯಿ ಹಾಲು ಮಗುವಿಗೆ ದ್ರವ ರೂಪದ ಪ್ರೀತಿ : ಡಾ. ಎಸ್.ಬಿ. ದಾನರೆಡ್ಡಿ
ಕೊಪ್ಪಳ ಆ. 04 (ಕರ್ನಾಟಕ ವಾರ್ತೆ): ಹುಟ್ಟಿದ ಮಗುವಿಗೆ ತಾಯಿ ಹಾಲು ದ್ರವ ರೂಪದ ಪ್ರೀತಿ ಎರೆದಂತೆ. ಹೀಗಾಗಿ ಜನಿಸಿದ ಮಗುವಿಗೆ ಬಾಹ್ಯ ಆಹಾರ ನೀಡುವುದಕ್ಕಿಂತ ಮೊಲೆ ಹಾಲು ಉಣಿಸುವುದು ಅತ್ಯಂತ ಶ್ರೇಷ್ಠಕರ ಎಂದು ಕೊಪ್ಪಳ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್.ಬಿ. ದಾನರೆಡ್ಡಿ ಅವರು ಹೇಳಿದರು.

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ 26ನೇ ವಿಶ್ವ ಸ್ತನ್ಯಪಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಯಿ ಹಾಲು ದ್ರವರೂಪದ ಪ್ರೀತಿ ಇದ್ದ ಹಾಗೆ. ಹೀಗಾಗಿ ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಅತ್ಯುತ್ತಮ ಶ್ರೇಷ್ಠ ಆಹಾರವಾಗಿದೆ. ಜೇನುತುಪ್ಪ, ಸಕ್ಕರೆ ಮುಂತಾದ ಬಾಹ್ಯ ಆಹಾರವನ್ನು ಮಗುವಿಗೆ ಉಣಿಸಬಾರದು, ಬದಲಿಗೆ ಸ್ತನ್ಯ ಪಾನ ಮಾಡಿಸಬೇಕು. ಪ್ರತಿದಿನ ಮಗುವಿಗೆ ತಾಯಿ ಹಾಲು ಕುಡಿಸುವದರಿಂದ ವೈದ್ಯರನ್ನು ದೂರವಿಡಬಹುದು, ತಾಯಿ ಹಾಲು ಪ್ರಕೃತಿ ದತ್ತ ಚಿಕಿತ್ಸೆ ಇದ್ದ ಹಾಗೆ ಮತ್ತು ಪ್ರಕೃತಿಯ ಆರೋಗ್ಯ ಯೋಜನೆ ಇದಾಗಿದೆ. ಸ್ತನ್ಯಪಾನ ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು ಎಂದು ಡಾ. ಎಸ್.ಬಿ. ದಾನರೆಡ್ಡಿ ಅವರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ನೋಡಲ್ ಅಧಿಕಾರಿ ಡಾ. ಸಂಜಯ್ ಪಾಟೀಲ್ ಮಾತನಾಡಿ ಜಗತ್ತಿನಾದ್ಯಂತ ಇಂದು 26ನೇ ಸ್ತನ್ಯಪಾನ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಹಾಗೂ ಶಿಶುವಿನ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದರು.
ಕಿಮ್ಸ್ ನಿರ್ದೇಶಕ ಡಾ|| ಶಂಕರ ಮಲಪುರಿ ಮಾತನಾಡಿ, ಇಂದು ತಾಯಂದಿರು ಮೊಲೆ ಉಣಿಸುವುದು ಒಂದು ಒಳ್ಳೆಯ ನಾಗರಿಕತೆಯ ಲಕ್ಷಣವಾಗಿದೆ. ಹುಟ್ಟಿದ ತಕ್ಷಣ ಮಗುವಿಗೆ ಮೊಲೆ ಹಾಲು ಉಣಿಸಬೇಕು ಹಾಗೂ ಹಾಲು ಉಣಿಸುವಾಗ ಮಗುವನ್ನು ಹಾಲುಣಿಸುವ ಭಂಗಿಯಲ್ಲಿ ಕುಳಿತು ಹಾಲು ಉಣಿಸುವುದು ಸರಿಯಾದ ಕ್ರಮ. ಮಗು ಹುಟ್ಟಿದ ತಕ್ಷಣ ಜೆನು, ತುಪ್ಪ, ಸಕ್ಕರೆ, ಯಾವುದೇ ಕಾರಣಕ್ಕೂ ಮಗುವಿನ ಬಾಯಿಯಲ್ಲಿ ಹಾಕಬಾರದು. ಮಗುವಿನ ಪಾಲನೇಯಲ್ಲಿ ತಾಯಿಯಂತೆ ತಂದೆಯ ಪಾತ್ರವು ಕೂಡ ಅಷ್ಟೇ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.
ಕಿಮ್ಸ್ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಸ್.ಜಿ. ಮಟ್ಟಿ ಅವರು, ತಾಯಿ ಮೊಲೆ ಹಾಲುಣಿಸುವುದರಿಂದ ಮಗುವಿಗೆ ದೋಷರಹಿತ ಆಹಾರ ಸಿಗುತ್ತದೆ. ಹಾಗೂ ಉತ್ತಮ ಆರೋಗ್ಯಕರ ಬೆಳವಣಿಗೆ ಆಗುತ್ತದೆ. ತಾಯಂದಿರಿಗೆ ಗರ್ಭನಿರೋದಕ ಪಾತ್ರ ವಹಿಸಲಿದೆ. ಗರ್ಭಕೋಶ ಚೆನ್ನಾಗಿ ಸಂಕುಚಿತಗೊಳ್ಳುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಿ.ಎಸ್. ಮಾದಿನೂರ, ಸ್ಥಾನಿಕ ವೈದ್ಯಾಧಿಕಾರಿ ಡಾ. ಲಕ್ಷ್ಮೀನಾರಾಯಣರಾವ್, ಡಾ. ಸಿದ್ದಲಿಂಗಯ್ಯ, ಡಾ. ಧನಲಕ್ಷ್ಮಿ ಪಾಲ್ಗೊಂಡಿದ್ದರು. ಎಸ್.ಎನ್.ಸಿ.ಯು. ಸಿಬ್ಬಂದಿಯಿಂದ ಜಾಗತಿಕ ಸ್ತನ್ಯಪಾನ ಕುರಿತು ಕಿರುನಾಟಕ ಪ್ರದರ್ಶನಗೊಂಡಿತು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಆರ್. ಚವ್ಹಾಣ ನಿರೂಪಿಸಿದರು.
ಹೀಗಾಗಿ ಲೇಖನಗಳು ತಾಯಿ ಹಾಲು ಮಗುವಿಗೆ ದ್ರವ ರೂಪದ ಪ್ರೀತಿ : ಡಾ. ಎಸ್.ಬಿ. ದಾನರೆಡ್ಡಿ
ಎಲ್ಲಾ ಲೇಖನಗಳು ಆಗಿದೆ ತಾಯಿ ಹಾಲು ಮಗುವಿಗೆ ದ್ರವ ರೂಪದ ಪ್ರೀತಿ : ಡಾ. ಎಸ್.ಬಿ. ದಾನರೆಡ್ಡಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತಾಯಿ ಹಾಲು ಮಗುವಿಗೆ ದ್ರವ ರೂಪದ ಪ್ರೀತಿ : ಡಾ. ಎಸ್.ಬಿ. ದಾನರೆಡ್ಡಿ ಲಿಂಕ್ ವಿಳಾಸ https://dekalungi.blogspot.com/2018/08/blog-post_86.html
0 Response to "ತಾಯಿ ಹಾಲು ಮಗುವಿಗೆ ದ್ರವ ರೂಪದ ಪ್ರೀತಿ : ಡಾ. ಎಸ್.ಬಿ. ದಾನರೆಡ್ಡಿ"
ಕಾಮೆಂಟ್ ಪೋಸ್ಟ್ ಮಾಡಿ