ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ

ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ
ಲಿಂಕ್ : ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ

ಓದಿ


ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ




ಮಡಿಕೇರಿ ಆ.21 (ಕರ್ನಾಟಕ ವಾರ್ತೆ):- ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಆಸ್ತಿ-ಪಾಸ್ತಿ ನಷ್ಟ, ಜೀವ ಹಾನಿ ಅನುಭವಿಸಿರುವ ಕುಟುಂಬಗಳಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಮೂಲಕ ಬದುಕಿನಲ್ಲಿ ಭರವಸೆ ಮೂಡಿಸಲು ಮಾನಸಿಕ ತಜ್ಞರಿಂದ ಸಂತ್ರಸ್ತರಿಗೆ ಸಮಾಲೋಚನೆ ಮಾಡಿಸುವ ಕಾರ್ಯವನ್ನು ಆರಂಭಿಸಲಾಗಿದೆ.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುರುವ ಮಾನಸಿಕ ತಜ್ಞ ವೈದ್ಯರಾದ ಡಾ. ರೂಪೇಶ್ ಗೋಪಾಲ್ ಅವರು ಈ ನಿಟ್ಟಿನಲ್ಲಿ ಈಗಾಗಲೆ ಕಾರ್ಯತತ್ಪರರಾಗಿದ್ದು, ಜಿಲ್ಲೆಯ ವೈದ್ಯರುಗಳು, ಮಾನಸಿಕ ತಜ್ಞರು ಹಾಗೂ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳಿಗೆ ಈ ಕುರಿತು ತರಬೇತಿಯನ್ನು ಮಂಗಳವಾರದಂದು ಮಡಿಕೇರಿಯ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು.

ಮಾನಸಿಕ ರೋಗ ತಜ್ಞರಾಗಿರುವ ಡಾ. ರೂಪೇಶ್ ಗೋಪಾಲ್ ಅವರು ಭಾರತೀಯ ಸೇನೆಯಲ್ಲಿ ಸುಮಾರು 05 ವರ್ಷಗಳ ಕಾಲ ಮಾನಸಿಕ ರೋಗ ತಜ್ಞರಾಗಿ ಸೇವೆ ಸಲ್ಲಿಸಿದ್ದು, ಸೈನ್ಯದಲ್ಲೂ ಅವರು, ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವಂತಹ ಕಾರ್ಯವೆಸಗಿದ ಅಪಾರ ಅನುಭವ ಹೊಂದಿದ್ದಾರೆ.
ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರೊಂದಿಗೆ ಸಮಾಲೋಚನೆ :
************* ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಆಸ್ತಿ-ಪಾಸ್ತಿ ನಷ್ಟ ಅನುಭವಿಸಿ ಕಣ್ಣ ಮುಂದೆಯೇ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಅವರಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬಬೇಕಿದೆ. ಆರೋಗ್ಯ ಪೂರ್ಣ ಮನಸ್ಸುಗಳನ್ನು ನಿರ್ಮಿಸುವ ಮೂಲಕ ಸಂತ್ರಸ್ತರಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸುವ ಕಾರ್ಯ ಆಗಬೇಕಿದೆ. ದೇಹದ ಆರೋಗ್ಯಕ್ಕೆ ನೀಡಿದಷ್ಟೇ ಆದ್ಯತೆಯನ್ನು ಮನಸ್ಸಿನ ಆರೋಗ್ಯಕ್ಕೂ ನೀಡಬೇಕಿದೆ. ಇದರ ಪ್ರಯತ್ನವಾಗಿಯೇ ಜಿಲ್ಲೆಯಲ್ಲಿ ಸಂತ್ರಸ್ತರಿಗಾಗಿ ಸರ್ಕಾರದಿಂದ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸುವ ಕಾರ್ಯ ಇಂದಿನಿಂದಲೇ ಪ್ರಾರಂಭಗೊಳಿಸಲಾಗುವುದು. 
ಸರ್ಕಾರ ನಿಮ್ಮೊಂದಿಗೆ ಇದೆ ಎನ್ನುವ ಭರವಸೆ ಮೂಡಿಸಬೇಕು : 
*************ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರಿಗೆ ಸದ್ಯ ಆ ಶಾಕ್‍ನಿಂದ ಹೊರತರುವ ಕಾರ್ಯ ಆಗಬೇಕಿದೆ. ದಿಢೀರ್ ತೊಂದರೆಗೆ ಒಳಗಾದವರ ಮನಸ್ಸು, ಬುದ್ದಿ ಚುರುಕಾಗಿರುವುದಿಲ್ಲ, ದೇಹದ ಹಾರ್ಮೋನ್‍ನಲ್ಲಿ ವ್ಯತ್ಯಾಸವಾಗುವುದರಿಂದ ಅವರಲ್ಲಿ ಯೋಚನಾ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು, ಈಗಾಗಲೆ ಬಹಳಷ್ಟು ಜನ ಇದಕ್ಕೆ ಒಳಗಾಗಿರುವ ಸಾಧ್ಯತೆ ಇದ್ದು, ಗಾಬರಿ, ಹೆದರಿಕೆ ಅವರ ಮೊದಲ ಸಮಸ್ಯೆಯಾಗಿದೆ. ಇದು ಮಾನಸಿಕ ತೊಂದರೆಯ ಮೊದಲ ಗುಣಲಕ್ಷಣವಾಗಿದ್ದು, ಕಿರಿಕಿರಿ, ಸಿಟ್ಟು, ಮಕ್ಕಳ ಮೇಲೆ, ತಂದೆ-ತಾಯಿ, ಗಂಡ-ಹೆಂಡತಿಯರ ನಡುವೆ ಆಸಕ್ತಿ ಮತ್ತು ಸಿಟ್ಟಾಗುವುದು ಇಂತಹ ಲಕ್ಷಣಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಪ್ರೀತಿ ಪಾತ್ರರನ್ನು ಅಥವಾ ಮನೆಗಳನ್ನು ಕಳೆದುಕೊಂಡು, ಮುಂದೇನು ಎನ್ನುವ ಭಯ ಅವರಲ್ಲಿ ಆವರಿಸಿರುತ್ತದೆ. ಇಂತಹವರಿಗೆ ಸಮಾಲೋಚನೆ ನಡೆಸುವ ಮೂಲಕ, ಸರ್ಕಾರ ನಿಮ್ಮೊಂದಿಗೆ ಸದಾ ಇದೆ. ಪರಿಹಾರ ಕಾರ್ಯಗಳನ್ನು ಮಾಡುತ್ತಿದೆ. ಸದ್ಯ ಸರ್ಕಾರ ಜನರ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಮಾಹಿತಿ ಪಡೆದು, ಶೀಘ್ರದಲ್ಲೇ ಪುನರ್ವಸತಿ ಕಾರ್ಯ, ಮನೆ ಕಳೆದುಕೊಂಡವರಿಗೆ ಮನೆ, ಜೀವ ಹಾನಿ ಅನುಭವಿಸಿರುವವರಿಗೆ ಹಣಕಾಸಿನ ನೆರವು ಪರಿಹಾರ ದೊರಕಿಸುವ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಎಲ್ಲೆಲ್ಲಿ ಸಂತ್ರಸ್ತರಿಗೆ ಸಮಾಲೋಚನೆ :
************ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿಯೇ ಅತವೃಷ್ಟಿಯಿಂದ ಹೆಚ್ಚು ಹಾನಿ ಸಂಭವಿಸಿದೆ. ಮಡಿಕೇರಿಯಲ್ಲಿ ಸಂತ್ರಸ್ತರಿಗಾಗಿ 11 ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೈತ್ರಿ ಹಾಲ್, ಕೂರ್ಗ್ ಕಮ್ಯುನಿಟಿ ಹಾಲ್, ಅಂಬೇಡ್ಕರ್ ಭವನ, ಚೌಡೇಶ್ವರಿ ಹಾಲ್, ಬ್ರಾಹ್ಮಣರ ಕಲ್ಯಾಣ ಮಂಟಪ, ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪ, ಕೊಡವ ಸಮಾಜ, ಓಂಕಾರ ಸದನ, ಜಿಪಂ ವಿದ್ಯಾನಗರ, ಜನರಲ್ ತಿಮ್ಮಯ್ಯ ಸ್ಕೂಲ್, ಜೋಸೆಫ್ ಸ್ಕೂಲ್ ಇಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಮಾನಸಿಕ ಸಮಾಲೋಚನೆಗಾಗಿ ತಂಡವನ್ನು ರಚಿಸಿ, ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಹೆದರಿಕೆ, ಬೇಜಾರು, ಸಿಟ್ಟು ಈ ಮೂರು ಅಂಶಗಳನ್ನು ನಿವಾರಿಸಬೇಕಿದೆ :
****************** ಏಕಾಏಕಿ ಸುರಿದ ಭಾರಿ ಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾದವರಿಗೆ ಮಾನಸಿಕವಾಗಿ ಮೊದಲು ಕಂಡುಬರುವ ಹೆದರಿಕೆ, ಬೇಜಾರು ಮತ್ತು ಸಿಟ್ಟು, ಈ ಮೂರು ಅಂಶಗಳನ್ನು ನಿವಾರಿಸುವ ಗುರುತರ ಕಾರ್ಯ ಮಾನಸಿಕ ತಜ್ಞ ಸಮಾಲೋಚಕರು ಮಾಡಬೇಕಿದೆ. ಸಂತ್ರಸ್ತರ ಮಾತುಗಳನ್ನು ತಾಳ್ಮೆಯಿಂದ ಕೇಳಿ, ಬೇಸರಿಸಿಕೊಳ್ಳಬೇಡಿ, ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಇದೇ ಸೂಕ್ತ ಸಮಯವಾಗಿದೆ. ಇಲ್ಲದಿದ್ದಲ್ಲಿ, ಅವರ ಯೋಚನಾ ಲಹರಿ ಋಣಾತ್ಮಕ ಅಂಶಗಳತ್ತ ಸೆಳೆಯುವ ಸಾಧ್ಯತೆಗಳಿರುತ್ತವೆ. ಖಿನ್ನತೆ, ಮಾದಕಗಳತ್ತ ಮನಸ್ಸು ಜಾರುವುದನ್ನು ತಡೆಗಟ್ಟುವುದು ಸಮಾಲೋಚಕರ ಕರ್ತವ್ಯವಾಗಿದೆ. ಕೆಲ ಕಿಡಿಗೇಡಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯ ಮಾಡುವ ಸಾಧ್ಯತೆಗಳಿರುತ್ತವೆ. ಇದನ್ನು ಕೂಡ ಮಾನಸಿಕ ಸ್ಥೈರ್ಯ ತುಂಬುವ ಸಮಯದಲ್ಲಿ ಸಮಾಲೋಚಕರು ಇಂತಹ ಸಾಧ್ಯತೆಗಳ ಬಗ್ಗೆ ಸಂತ್ರಸ್ತರಲ್ಲಿ ಮನವರಿಕೆ ಮಾಡಿಕೊಡಬೇಕು. 
ಯೋಗಾಭ್ಯಾಸಕ್ಕೆ 30 ಜನರ ತಂಡ :
********** ವಿಚಲಿತಗೊಂಡಿರುವ ಮನಸ್ಸನ್ನು ಶಾಂತಗೊಳಿಸಲು, ಸಮಾಧಾನಗೊಳಿಸಲು ಯೋಗ ಒಳ್ಳೆಯ ಮಾರ್ಗವಾಗಿದೆ. ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ, ಸಂತ್ರಸ್ತರ ಮನಸ್ಸನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ 30 ಜನರ ತಂಡ ಕೊಡಗು ಜಿಲ್ಲೆಗೆ ಆಗಮಿಸಿದ್ದು, ಇವರು ಪರಿಹಾರ ಕೇಂದ್ರಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಯೋಗಾಭ್ಯಾಸ ಮಾಡಿಸಲಿದ್ದಾರೆ ಎಂದು ಡಾ. ರೂಪೇಶ್ ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳಿಗೆ ಸೃಜನಶೀಲ ಚಟುವಟಿಕೆ :
*************** ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಗುರುತಿಸಿ ಅವರಿಗೆ ಗುಂಪು ಅಥವಾ ವಯಕ್ತಿಕ ಸೃಜನಶೀಲ ಚಟುವಟಿಕೆಗಳಾದ ಹಾಡಿನ ಸ್ಪರ್ಧೆ, ಕ್ರೀಡೆಗಳು, ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ನೀಡಿ, ಮನಸ್ಸು ಉಲ್ಲಸಿತಗೊಳಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಜಿಲ್ಲಾಡಳಿತ ನೆರವು ನೀಡಲು ಸಿದ್ಧವಿದೆ. ಪುರುಷರು ಮಾದಕ ಹವ್ಯಾಸಗಳತ್ತ ಜಾರದಂತೆ ನೋಡಿಕೊಳ್ಳಬೇಕಿದೆ. ಸಮಾಲೋಚಕರು ಈ ಕುರಿತು ಕಾರ್ಯ ಕೈಗೊಳ್ಳಿ ಎಂದು ಸಲಹೆಗಳನ್ನು ಡಾ. ರೂಪೇಶ್ ಅವರು ನೀಡಿದರು.
ಜಿಲ್ಲೆಯ ಮಾನಸಿಕ ತಜ್ಞರು, ವೈದ್ಯರು, ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿ, ಜಿಲ್ಲೆಯಲ್ಲಿ ಸ್ವಯಂ ಪ್ರೇರಣೆಯಿಂದ, ಸಂತ್ರಸ್ತರಲ್ಲಿ ಮಾನಸಿಕ ಆರೋಗ್ಯ ರೂಪಿಸುವಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುವ ಭರವಸೆ ನೀಡಿದರು.


ಹೀಗಾಗಿ ಲೇಖನಗಳು ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ

ಎಲ್ಲಾ ಲೇಖನಗಳು ಆಗಿದೆ ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ ಲಿಂಕ್ ವಿಳಾಸ https://dekalungi.blogspot.com/2018/08/blog-post_49.html

Subscribe to receive free email updates:

0 Response to "ಸಂತ್ರಸ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಕೊಡಗು ಜಿಲ್ಲಾಡಳಿತ ವಿಶೇಷ ಕ್ರಮ : ಮಾನಸಿಕ ತಜ್ಞರಿಂದ ಸಂತ್ರಸ್ತರೊಂದಿಗೆ ಸಮಾಲೋಚನೆ ಕಾರ್ಯ ಪ್ರಾರಂಭ"

ಕಾಮೆಂಟ್‌‌ ಪೋಸ್ಟ್‌ ಮಾಡಿ