ಶೀರ್ಷಿಕೆ : ಆನೆಗುಂದಿ ಗ್ರಾಮದಲ್ಲಿ ಶಿಕ್ಷರಿಂದ ಮತದಾನ ಜಾಗೃತಿ ಜಾಥಾ
ಲಿಂಕ್ : ಆನೆಗುಂದಿ ಗ್ರಾಮದಲ್ಲಿ ಶಿಕ್ಷರಿಂದ ಮತದಾನ ಜಾಗೃತಿ ಜಾಥಾ
ಆನೆಗುಂದಿ ಗ್ರಾಮದಲ್ಲಿ ಶಿಕ್ಷರಿಂದ ಮತದಾನ ಜಾಗೃತಿ ಜಾಥಾ

ಕೊಪ್ಪಳ ಏ. 17 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳ ಶಿಕ್ಷಕರುಗಳಿಂದ ಆನೆಗುಂದಿ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಗಂಗಾವತಿ ತಾಲೂಕ ಆನೆಗುಂದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರುಗಳಿಂದ ಮತದಾನ ಜಾಗೃತಿ ಜಾಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಗೆ "ನಮ್ಮ ಮತ ನಮ್ಮ ಹಕ್ಕು" ಎಲ್ಲರೂ ಕಡ್ಡಾಯವಾಗಿ ಮೇ. 12 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾತದಾನ ಮಾಡುವಂತೆ ತಿಳಿಸಲಾಯಿತು.
ಆನೆಗುಂದಿ ಗ್ರಾಮದ ಪ್ರಮುಖ ವೃತ್ತದಲ್ಲಿ ಮತದಾನ ಜಾಗೃತಿ ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಘೋಷಣೆಗಳನ್ನು ಕೂಗುವುದರ ಮೂಲಕ ಸ್ವೀಪ್ ಕಾರ್ಯಕ್ರಮವನ್ನು ಆಚರಿಸಲಾಯಿತು. ಅಲ್ಲದೇ ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುವ ಬಗ್ಗೆ ಸಂಕಲ್ಪ ಪ್ರಮಾಣ ವಚನ ಬೋಧಿಸಿ ಸಂಕಲ್ಪ ಪ್ರಮಾಣ ಪತ್ರಗಳಿಗೆ ಕುಟುಂಬದ ಮುಖ್ಯಸ್ಥರ ಸಹಿ ಪಡೆಯಲಾಯಿತು. ಗ್ರಾಮದ ಹಿರಿಯರು, ಯುವಕರು, ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಾದ ವಿಜಯಕುಮಾರ ಹಾಗೂ ಸಹ ಶಿಕ್ಷಕರಾದ ಶಂಕ್ರಪ್ಪ ಹಾಗೂ ಇತರರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಆನೆಗುಂದಿ ಗ್ರಾಮದಲ್ಲಿ ಶಿಕ್ಷರಿಂದ ಮತದಾನ ಜಾಗೃತಿ ಜಾಥಾ
ಎಲ್ಲಾ ಲೇಖನಗಳು ಆಗಿದೆ ಆನೆಗುಂದಿ ಗ್ರಾಮದಲ್ಲಿ ಶಿಕ್ಷರಿಂದ ಮತದಾನ ಜಾಗೃತಿ ಜಾಥಾ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆನೆಗುಂದಿ ಗ್ರಾಮದಲ್ಲಿ ಶಿಕ್ಷರಿಂದ ಮತದಾನ ಜಾಗೃತಿ ಜಾಥಾ ಲಿಂಕ್ ವಿಳಾಸ https://dekalungi.blogspot.com/2018/04/blog-post_98.html
0 Response to "ಆನೆಗುಂದಿ ಗ್ರಾಮದಲ್ಲಿ ಶಿಕ್ಷರಿಂದ ಮತದಾನ ಜಾಗೃತಿ ಜಾಥಾ"
ಕಾಮೆಂಟ್ ಪೋಸ್ಟ್ ಮಾಡಿ