ಶೀರ್ಷಿಕೆ : ಜಿಲ್ಲಾ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆ
ಲಿಂಕ್ : ಜಿಲ್ಲಾ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆ
ಜಿಲ್ಲಾ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆ
ಕೊಪ್ಪಳ ಡಿ. 21(ಕರ್ನಾಟಕ ವಾರ್ತೆ) : ಕರ್ನಾಟಕ ಸಾಹಿತ್ಯ ಅಕಾಡೆಮಿಯು “ಬಂಗಾರದ ಎಲೆಗಳು” ಎಂಬ ಹೆಸರಿನ ಕ್ರಿ.ಶ. 1820 ರಿಂದ 2020 ರವರೆಗಿನ ಕನ್ನಡ ಸಾಹಿತಿಗಳ ಮಾಹಿತಿಯನ್ನು ಸಂಗ್ರಹಿಸುವ ಯೋಜನೆಗೆ ನಗರದ ಹಿರಿಯ ಸಾಹಿತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತರಾದ ವಿಠ್ಠಪ್ಪ ಗೋರಂಟ್ಲಿ, ಎಚ್.ಎಸ್.ಪಾಟೀಲ್ ಹಾಗೂ ಹನುಮಾಕ್ಷಿ ಗೋಗಿ ಅವರು ತಮ್ಮ ಮಾಹಿತಿಯನ್ನು ಜಿಲ್ಲಾ ಕ್ಷೇತ್ರ ಸಂಗ್ರಹಕರರಾದ ವೀರಪ್ಪ ನಿಂಗೋಜಿ ಅವರಿಗೆ ಕೊಡುವ ಮೂಲಕ ಜಿಲ್ಲೆಯ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆಗೊಳಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಜಿಲ್ಲಾ ಕ್ಷೇತ್ರ ಸಂಗ್ರಹಗಾರರಾದ ವೀರಪ್ಪ ನಿಂಗೋಜಿ ಮಾತನಾಡಿ 2018 ಜನೇವರಿ 15 ರೊಳಗಾಗಿ ಮಾಹಿತಿಯನ್ನು ಜಿಲ್ಲಾ ಕ್ಷೇತ್ರ ಸಂಗ್ರಹಕಾರರಿಗೆ ಅಥವಾ ತಾಲೂಕಾ ಸಹಾಯಕ ಸಂಗ್ರಹಕರಾದ ಅಕ್ಬರ ಕಾಲಿಮಿರ್ಚಿ ಅವರಿಗೆ ಮಾಹಿತಿಯನ್ನು ಒದಗಿಸಲು ಕೋರಿದರು.
ಈ ಸಂದರ್ಭದಲ್ಲಿ ತಾಲೂಕಿನ ಮಾಹಿತಿ ಸಹಾಯಕ ಸಂಗ್ರಹಕರಾದ ಅಕ್ಬರ್ ಸಿ. ಕಾಲಿಮಿರ್ಚಿ, ಸಾಹಿತಿಗಳಾದ ಬಸವರಾಜ ಆಕಳವಾಡಿ, ಅಲ್ಲಮಪ್ರಭು ಬೆಟ್ಟದೂರ, ಡಾ ಮಹಾತೇಶ ಮಲ್ಲನಗೌಡರ, ಜಿಎಸ್. ಗೋನಾಳ, ವಿಮಲಾ ಇನಾಮದಾರ, ಶಿ.ಕಾ.ಬಡೀಗೇರ ಮಹೇಶ ಬಾಬು ಸುರ್ವೆ, ವೈ.ಬಿ.ಜೂಡಿ, ಮಂಜುನಾಥ ಗೊಂಡಬಾಳ, ವೀರಣ್ಣ ವಾಲಿ, ಉಮೇಶ ಪೂಜಾರ, ಸ. ಶರಣಪ್ಪ ಪಾಟೀಲ್, ಹಾಗೂ ಇತರರು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಜಿಲ್ಲಾ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಜಿಲ್ಲಾ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲಾ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/12/blog-post_96.html
0 Response to "ಜಿಲ್ಲಾ ಲೇಖಕರ ಮಾಹಿತಿ ಸಂಗ್ರಹಕ್ಕೆ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ