ಶೀರ್ಷಿಕೆ : ನ. 27 ರಿಂದ ಕೊಪ್ಪಳದಲ್ಲಿ ಆಧಾರ್ ಅದಾಲತ್
ಲಿಂಕ್ : ನ. 27 ರಿಂದ ಕೊಪ್ಪಳದಲ್ಲಿ ಆಧಾರ್ ಅದಾಲತ್
ನ. 27 ರಿಂದ ಕೊಪ್ಪಳದಲ್ಲಿ ಆಧಾರ್ ಅದಾಲತ್
ಕೊಪ್ಪಳ ನ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತವು ಇ-ಆಡಳಿತ ಬೆಂಗಳೂರು ಇವರ ಸಹಯೋಗದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮವನ್ನು ನ. 27 ರಿಂದ ಡಿ. 02 ರವರೆಗೆ ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಿದ್ದು, ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ, ವಿಳಾಸ ಬದಲಾವಣೆ ಇಂತಹ ಕಾರ್ಯ ಚಟುವಟಿಕೆಗಳನ್ನು ಮಾಡಿಕೊಡಲಾಗುವುದು.
ಇದುವರೆಗೂ ಆಧಾರ್ ನೊಂದಣಿ ಮಾಡಿಸದೇ ಇರುವವರು, ಆಧಾರ್ ನೋಂದಣಿ ಮಾಡಿಸಿಕೊಳ್ಳಬಹುದು. ಅಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ, ವಿಳಾಸ ಬದಲಾವಣೆ ಮಾಡಿಸಲೂ ಅವಕಾಶ ಇರುತ್ತದೆ. ಈ ವಿಶೇಷ ಕಾರ್ಯಕ್ರಮದ ಪ್ರಯೋಜನ ಪಡೆಯಬಯಸುವವರು, ಸ್ವಯಂ ದೃಢೀಕರಿಸಿದ ದಾಖಲಾತಿಗಳಾದ ಮತದಾರರ ಗುರುತಿನ ಚೀಟಿ, ಎಸ್ಎಸ್ಎಲ್ಸಿ ಅಂಕಪಟ್ಟಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ವಾಸಸ್ಥಳ ಪ್ರಮಾಣ ಪತ್ರ, ಪಾನ್ ಕಾರ್ಡ್, ಡಿ.ಎಲ್. ಪ್ರತಿ ಮತ್ತು ಇನ್ನಿತರ ಅಧಿಕೃತ ದಾಖಲಾತಿಗಳು ಹಾಗೂ ಈ ಹಿಂದೆ ಪಡೆದ ಆಧಾರ್ ಕಾರ್ಡ್ನ ಪ್ರತಿಯನ್ನು ತರಬೇಕು. ಸಾರ್ವಜನಿಕರು ಆಧಾರ್ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೀಗಾಗಿ ಲೇಖನಗಳು ನ. 27 ರಿಂದ ಕೊಪ್ಪಳದಲ್ಲಿ ಆಧಾರ್ ಅದಾಲತ್
ಎಲ್ಲಾ ಲೇಖನಗಳು ಆಗಿದೆ ನ. 27 ರಿಂದ ಕೊಪ್ಪಳದಲ್ಲಿ ಆಧಾರ್ ಅದಾಲತ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನ. 27 ರಿಂದ ಕೊಪ್ಪಳದಲ್ಲಿ ಆಧಾರ್ ಅದಾಲತ್ ಲಿಂಕ್ ವಿಳಾಸ https://dekalungi.blogspot.com/2017/11/27_21.html
0 Response to "ನ. 27 ರಿಂದ ಕೊಪ್ಪಳದಲ್ಲಿ ಆಧಾರ್ ಅದಾಲತ್"
ಕಾಮೆಂಟ್ ಪೋಸ್ಟ್ ಮಾಡಿ