- ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು , ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ :
ಲಿಂಕ್ :

ಓದಿ


ಮಳವಳ್ಳಿಯಬೆಟ್ಟದ ಜೀವ ಕಾಮೇಗೌಡ !

# ಕೆರೆಕಟ್ಟೆ ನಿರ್ಮಿಸಿದ ಹಠಯೋಗಿ # ಹತ್ತೂರು ನೀರ ಬವಣೆ ನೀಗಿದ ಭಗೀರಥ 

`ಕೆರೆಯಂ ಕಟ್ಟಿಸು,ಬಾವಿಯಂ ತೋಡಿಸು' ಎಂದು ಹಿರಿಯರು ಆಶೀವಾದಮಾಡುತ್ತಿದ್ದ ನಾಡು ನಮ್ಮದು.ಕಲ್ಲನಕೇರಿಯ ಮಲ್ಲನಗೌಡ ಊರಿನ ಹಿತಕ್ಕಾಗಿ ಕೆರೆಯನ್ನು ಕಟ್ಟಿಸಿ ಅದನ್ನು ಉಳಿಸಿಕೊಳ್ಳಲು ಕಿರಿಯಸೊಸೆ ಭಾಗೀರತಿಯನ್ನು ಕೆರೆಗೆ`ಹಾರ'ವಾಗಿ ಬಲಿಕೊಟ್ಟು ತ್ಯಾಗ, ಆದರ್ಶವನ್ನು ಮೆರೆದ ನಾಡು ನಮ್ಮದು.ಭೂಮಿತೂಕದ ಹೆಣ್ಣು,ಕ್ಷಮಯಾಧರಿತ್ರಿ, ಉದಾತ್ತ ಮನೋಭಾವದ ಭಾಗೀರತಿಯ ಕೆರೆಗೆಹಾರ ಕಥನ ಕವನವನ್ನು ಓದುತ್ತಿದ್ದರೆ,ಕೇಳುತ್ತಿದ್ದರೆ ಮನ ತೇವಗೊಳ್ಳುತ್ತದೆ.ನಮ್ಮಲ್ಲಿ ಕೆರೆಗಳಿಲ್ಲದ ಊರೇ ಇಲ್ಲ.ಆದರೆ ಈಗ ಜೀವನಾಡಿಗಳಂತಿರುವ ಕೆರೆಕಟ್ಟೆಗಳನ್ನೇ ನುಂಗುವ ಜನ ಹೆಚ್ಚಾಗುತ್ತಿರುವುದು ದುರಂತ.ಪರಿಣಾಮ ಒಂದು ಬಿರುಮಳೆ ಬಂದರೆ ನಗರಗಳೆಲ್ಲ ನೀರಿನಲ್ಲಿ ತೇಲುತ್ತವೆ. ಪ್ರಕೃತಿ ಕೆರೆ ಸಂರಕ್ಷಣೆಯ ಪಾಠ ಕಲಿಸುತ್ತಿದೆ.
ತಮ್ಮ ಮಕ್ಕಳು,ಮೊಮಕ್ಕಳಿಗಾಗಿ ಆಸ್ತಿ ಹಣ ಮಾಡುವವರನ್ನು ಕಂಡಿದ್ದೇವೆ,ಕೇಳಿದ್ದೇವೆ.ಆದರೆ ಸಕರ್ಾರಿ ಜಾಗದಲ್ಲಿ ತನ್ನ ಮಕ್ಕಳು,ಮೊಮ್ಮಕ್ಕಳಿಗಾಗಿ ಕೆರೆಕಟ್ಟೆ ಕಟ್ಟುವ ಜೀವವನ್ನು ನೋಡಿರುವುದಿಲ್ಲ.ಅಂತಹ ಒಂದು ಬೆಟ್ಟದಜೀವವನ್ನು ಕಣ್ಣ್ತುಂಬಿಕೊಳ್ಳುವ ಅವಕಾಶವನ್ನು ಮೈಸೂರಿನ ನಾಟಕ ಕರ್ನಾಟಕ ರಂಗಾಯಣ ಕಲ್ಪಿಸಿತ್ತು.ಅದಕ್ಕಾಗಿ ರಂಗಾಯಣ ಸಿಬ್ಬಂದಿ ಅಭಿನಂದನಾರ್ಹರು.
ದಸರಾ ಪ್ರಯುಕ್ತ ಪ್ರತಿವರ್ಷ ನಡೆಸುವ ನವರಾತ್ರಿ ರಂಗೋತ್ಸವದಲ್ಲಿ ಪ್ರತಿದಿನ ಸಾಧಕರೊಬ್ಬರನ್ನು ಕರೆಸಿ ಸನ್ಮಾನಿಸಲಾಗುತ್ತದೆ.ಇದರ ಅಂಗವಾಗಿ ಸೆ.23 ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನಕೊಪ್ಪಲಿನ ಬೆಟ್ಟದ ಜೀವ ಕಾಮೇಗೌಡರನ್ನು ಕರೆಸಿದ್ದಾಗ ಅವರನ್ನು ಸನ್ಮಾನಿಸುವ ಸೌಭಾಗ್ಯ ನನ್ನ ಪಾಲಿಗೆ ಒದಗಿಬಂದಿತ್ತು. ಅಂತಹ ಹಿರಿಯ ಜೀವವನ್ನು ಕಂಡು ಮಾತನಾಡಿಸಿ,ಅವರು ಹೇಳಿದ್ದನ್ನು ಕೇಳಿದ ಮೇಲೆ ಮನಸ್ಸು ಕೆಲದಿನ ತಲ್ಲಣ ಅನುಭವಿಸಿತು. ಒಂದು ಧರ್ಮಕಾರ್ಯವನ್ನು ಮಾಡಬೇಕಾದರೆ ಮನಸ್ಸು ಹೇಗೆ ಬಂಡೆಯಂತೆ ಗಟ್ಟಿಯಾಗಿರಬೇಕು.ಎಂತಹ ತ್ಯಾಗಕ್ಕೆ ಸಿದ್ಧವಾಗಬೇಕು ಎನ್ನುವ ಕಟುಸತ್ಯವನ್ನು ಕಾಮೇಗೌಡರು ಬಿಚ್ಚಿಟ್ಟಾಗ ಎಲ್ಲರ ಮುಖದಲ್ಲೂ ಗಾಢಮೌನವೊಂದು ಆವರಿಸಿತ್ತು. ಅಂತಹ ಒಂದು ಅಪರೂಪದ ಕಾಡಿನ ಹೂ `ಬೆಟ್ಟದಜೀವ' ಈ ವಾರದ ಬಂಗಾರದ ಮನುಷ್ಯ.
ಅಂದು 74 ರ ಹರಯದ ಕಾಮೇಗೌಡ ಗಾಂಧಿಯಂತೆ ನಡೆದುಬಂದರು. ಕೈಯಲ್ಲಿ ಕೋಲು.ಹೆಗಲ ಮೇಲೊಂದು ಹಸಿರು ಶಾಲು.ಮಾತಿಗೆ ನಿಂತರೆ ರಾಮಾಯಣ,ಮಹಾಭಾರತದ ನೀತಿಕತೆಗಳು ಪುಂಖಾನುಪುಂಖವಾಗಿ ಪ್ರಾಸಂಗಿಕವಾಗಿ ಬಂದುಹೋಗುತ್ತಿರುತ್ತವೆ. ಮಾತಿನಲ್ಲಿ ವಿರಾಗಿ ಅಲ್ಲಮನ ದನಿ ಇಣುಕುತ್ತದೆ.ಗಾಂಧಿಯ ಕಠಿಣ ವೃತನಿಷ್ಠೆ ಎದ್ದು ಕಾಣುತ್ತದೆ.ಬೆಳಕಾಗಿ ಹಾದಿ ತೋರಬೇಕಿದ್ದ ಜ್ಞಾನ ಬೆಂಕಿಯಾಗಿ ಸುಡುತ್ತಿರುವ ಸುಡುವಾಸ್ತವದಲ್ಲಿ ಬೆಟ್ಟಕ್ಕೆ ತಂಪೆರೆಯುತ್ತಿರುವ ಜೀವವೊಂದರ ಬಗ್ಗೆ ಬರೆಯುತ್ತಿದ್ದೇನೆ.
ಕಾಡಿನ ಕುಸುಮ : ಕಾಮೇಗೌಡ ವನ್ಯಪ್ರಾಣಿಗಳೊಂದಿಗೆ ಬೆಳದ ಗಟ್ಟಿಜೀವ.ಜನರ ಸಂಪರ್ಕ ಅವರಿಗೆ ಆಗಲಿಲ್ಲ. ನಾಗರಿಕತೆಯ ರೀತಿರಿವಾಜುಗಳನ್ನು ಇವರು ಕಲಿಯಲಿಲ್ಲ.ಬೆಟ್ಟದ ತಪ್ಪಲಿನಲ್ಲಿ ಕುರಿಕಾಯುತ್ತಾ ಕುಳಿತುಕೊಳ್ಳುವುದು. ಪ್ರಾಣಿಗಳ ಚಲನವಲನವನ್ನು ಗಮನಿಸುವುದು.ಅವುಗಳ ಸಂಕಷ್ಟವನ್ನು ಅರಿಯುವುದು ಇವರ ಅಭ್ಯಾಸ. ವನ್ಯಪ್ರಾಣಿಗಳಿಗೆ ಬೇಕಾದ ನೀರು,ಅನ್ನಾಹಾರವನ್ನು ಕೊಡುವವರು ಯಾರು?.ಇವುಗಳ ಕಷ್ಟ ಕೇಳುವವರು ಯಾರು ? ಎಂಬ ಆಲೋಚನೆ ತಲೆಯಲ್ಲಿ ತುಂಬಿಕೊಂಡಾಗ ಗೌಡರಿಗೆ ಹೊಳೆದದ್ದು ಕೆರೆಕಟ್ಟೆ ನಿಮರ್ಾಣದ ಕನಸು.
ಮಕ್ಕಳಿಗಾಗಿ ದುಡಿದು ಸವೆದು ಆಸ್ತಿಮಾಡಿದರೆ ಮಕ್ಕಳು ಮೊಮಕ್ಕಳ ಕಾಲದವರೆಗೆ ಅದು ಬರುತ್ತದೆ.ನಂತರ ಆಸ್ತಿಯನ್ನು ತಿಂದುಂಡು ಹಾಳು ಮಾಡಿಬಿಡುತ್ತಾರೆ.ಯಾರ ನೆನಪಿನಲ್ಲೂ ಉಳಿಯುವುದಿಲ್ಲ. ಅದಕ್ಕಾಗಿ ಭೂಮಿಯ ಮೇಲೆ ಶಾಶ್ವತವಾದ ಕೆಲಸವನ್ನು ಮಾಡಬೇಕು ಎಂದು ನಿರ್ಧರಿಸಿದರು ಕಾಮೇಗೌಡ. ಅದರ ಫಲವಾಗಿ ಈಗ ಕುಂದೂರುಬೆಟ್ಟ ಕೆರೆಕಟ್ಟೆಗಳಿಂದ ನಳನಳಿಸುತ್ತಿದೆ
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಿಂದ 10 ಕಿ.ಮೀ.ದೂರದಲ್ಲಿದೆ ಕುಂದೂರು ಬೆಟ್ಟ. ಇದನ್ನು ಕುಂದನಪರ್ವತ ಎಂದೂ ಕರೆಯುತ್ತಾರೆ. ಲಿಂಗಾಕಾರದಲ್ಲಿರುವ ಈ ಬೆಟ್ಟದ ತಪ್ಪಲಿನಲ್ಲಿ ದಾಸನದೊಡ್ಡಿ,ಪಂಡಿತಹಳ್ಳಿ,ಹೊಸದೊಡ್ಡಿ,ತಿರುಮಳ್ಳಿ ಹಾಗೂ ಪಣತಹಳ್ಳಿ ಸೇರಿ ಹತ್ತೂರುಗಳಿವೆ. ಕಳೆದ 40 ವರ್ಷಗಳಿಂದ ಈ ಬೆಟ್ಟಕ್ಕೆ ಕಾವಲುಗಾರನಂತಿದ್ದಾರೆ ಬೆಟ್ಟದಜೀವ ದಾಸನದೊಡ್ಡಿಯ ಕಾಮೇಗೌಡ.
ಶಾಲೆಯ ಮೆಟ್ಟಿಲನ್ನೇ ಹತ್ತದ ಕಾಮೇಗೌಡ ಸರ್ವಋತುವಿನಲ್ಲೂ ನೀರು ಹಿಂಗದ ಕೆರೆಕಟ್ಟೆ ನಿಮರ್ಾಣ ಮಾಡಿದ್ದಾರೆ. ಬೆಟ್ಟದ ಮಧ್ಯಭಾಗದಿಂದ ದಾಸನದೊಡ್ಡಿ ಗ್ರಾಮದವರೆಗೆ ಐದು ಕಟ್ಟೆಗಳಿವೆ. ಇಳಿಜಾರಿನಿಂದ ಕೆಳಗಿನವರೆಗೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ನಾಲೆಗಳನ್ನು ಮಾಡಿದ್ದಾರೆ. ಜೆಲ್ಲೆ ಬರದಿಂದ ತತ್ತರಿಸಿದರೂ ಬೆಟ್ಟದ ತಪ್ಪಲಿನಲ್ಲಿರುವ ಹತ್ತೂರು ಜನಜಾನುವಾರುಗಳಿಗೆ ನೀರಿಗೆ ಬರವಿಲ್ಲ. ದಾಸನದೊಡ್ಡಿಯಿಂದ ಈಗ ಪಣತಹಳ್ಳಿ ತಪ್ಪಲಿನಲ್ಲಿ ಕೆರೆ ನಿಮರ್ಾಣ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ಕೆರೆಕಟ್ಟೆ ನಿಮರ್ಿಸುವುದರಲ್ಲಿಯೂ ಜಾಣ್ಮೆ ಮೆರೆದಿದದ್ದಾರೆ.ಮೊದಲು ಕೆರೆ ನಿಮರ್ಿಸಲು ಜಾಗವನ್ನು ಪತ್ತೆ ಮಾಡುತ್ತಾರೆ.ಅಲ್ಲಿ ಉಗಾದಿಗೂ ಮುನ್ನ ಅಗೆದಾಗ ತೇವ ಸಿಗುವಂತಿರಬೇಕು.ಆಗ ಅದು ಸರ್ವಋತುವಿನಲ್ಲೂ ನೀರು ನಿಲ್ಲುವ ಜಾಗ ಎನ್ನುವುದು ಕಾಮೇಗೌಡರ ಅನುಭವ. ತಾನೂ ಸತ್ತರೂ ಸಾವಿರಾರು ವರ್ಷ ಈ ಕೆರೆಗಳು ಕಾಮೇಗೌಡನ ಕೆರೆಗಳು ಎಂದು ಕರೆಸಿಕೊಳ್ಳಬೇಕು ಎನ್ನುವುದು ಇವರ ದೊಡ್ಡಆಸೆ.
ಹಠಯೋಗಿ : ಕೆರೆಕಟ್ಟೆ ನಿಮರ್ಾಣಮಾಡಲು ಕಾಮೇಗೌಡರು ಕಾಯಕ ಆರಂಭಿಸಿದರೆಂದರೆ ಎಂತಹ ತ್ಯಾಗಕ್ಕೂ ಸಿದ್ಧರಾಗಿಬಿಡುತ್ತಾರೆ.ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಮಾರಿ,ಇದು ಸಾಲದು ಎಂಬಂತೆ ಸಾಕಿದ ಕುರಿಗಳನ್ನು ಮಾರಿ ಐದು ಕೆರೆಕಟ್ಟೆ ಕಟ್ಟಿದ್ದಾರೆ.ಇದುವರೆಗೂ ಕೆರೆಕಟ್ಟೆ ನಿಮರ್ಾಣಕ್ಕೆ ಹೀಗೆ ಸ್ವಂತ ಏಳೆಂಟು ಲಕ್ಷ ರೂಪಾಯಿಗಳನ್ನು ಹೊಂದಿಸಿಕೊಂಡು ಕೆರೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ.
ಸೊಸೆ ಗರ್ಭಿಣಿಯಾಗಿದ್ದಾಗ ಹೆರಿಗೆಗೆಂದು ಇಪ್ಪತ್ತು ಸಾವಿರ ರೂಪಾಯಿ ಕೂಡಿಟ್ಟುಕೊಂಡಿದ್ದ ಕಾಮೇಗೌಡರು,ಸೊಸೆಗೆ ಸರಕಾರಿ ಆಸ್ಪತ್ರೆಯಲ್ಲಿ ಸಹಜವಾಗಿ ಹೆರಿಗೆಯಾದಾಗ ಕೂಡಿಟ್ಟ ಹಣವನ್ನು ಕಟ್ಟೆಕಟ್ಟಲು ಬಳಸಿದ್ದಾರೆ. ಮೊಮ್ಮಗನಿಗೆ ಕೃಷ್ಣ ಎಂದು ಹೆಸರಿಟ್ಟು ಕೃಷ್ಣನ ಹೆಸರಿನಲ್ಲಿ ಒಂದು ಕಟ್ಟೆ ಕಟ್ಟಿಬಿಟ್ಟೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಬೆಟ್ಟದ ಸುತ್ತಲ್ಲೂ ಕಣಗಿಲೆ.ಬಿಲ್ವಪತ್ರೆ,ಹುಣಸೆ,ಹೊಂಗೆ ಹೀಗೆ ಸಾವಿರಾರು ಗಿಡಗಳನ್ನು ನೆಟ್ಟು ಪ್ರಾಣಿಪಕ್ಷಿಗಳಿಗೆ ನೆರಳಾಗಿದ್ದಾರೆ. ಅರಣ್ಯ ಇಲಾಖೆಯವರು ನೆಟ್ಟ ಮರಗಿಡಗಳಿಗೂ ಕಾವಲಾಗಿದ್ದಾರೆ.
ದಾಸನದೊಡ್ಡಿಯ ನೀಲಿವೆಂಕಟಗೌಡರ ಹತ್ತು ಮಕ್ಕಳಲ್ಲಿ ಕೊನೆಯ ಮಗ ಕಾಮೇಗೌಡ.ಪತ್ನಿ ಕೆಂಪಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಪಿತ್ರಾಜರ್ಿತವಾಗಿ ಬಂದ ಎರಡು ಎಕರೆ ಜಮೀನು ಹಂಚಿ ತಾವು ಕಾಡುಪಾಲಾಗಿದ್ದಾರೆ. ಮಕ್ಕಳ ಮನೆಯಲ್ಲೇ ಆಶ್ರಯಪಡೆದಿರುವ ಕಾಮೇಗೌಡ ತಮಗೆ ಬರುವ ಮಾಸಿಕ ಪಿಂಚಣಿ ಹಣದಿಂದ ಸಸಿಗಳನ್ನು ಖರೀದಿಸಿ ಬೆಟ್ಟದಲ್ಲಿ ನೆಡುತ್ತಾರೆ.
ಭವದಿಂದ ಪಾರದ ಬಗೆ: `ನಮ್ಮ ವಂಶ ಹದವಾದ ವಂಶವಲ್ಲ. ಅದಕ್ಕಾಗಿ ನಾನಾದರೂ ಸರಿಯಾದ ಹಾದಿ ಹಿಡಿಯಬೇಕಲ್ಲಾ ಅಂತ ಅಂದುಕೊಂಡೆ. ಶಿವ ಈ ಭವದಿಂದ ನನ್ನನ್ನು ಪಾರುಮಾಡು ತಂದೆ ಅಂತ ಬೇಡಿಕೊಂಡೆ. ಮಾನವ ಜನ್ಮ ಅಪರೂಪದ್ದು. ಹೆಂಡತಿ, ಮಕ್ಕಳು, ಆಸ್ತಿ ಯಾವುದು ಶಾಶ್ವತ ಅಲ್ಲ.ಜೀವ ಇರುವವರೆಗೆ ಧರ್ಮಕಾರ್ಯ ಮಾಡಿಬಿಡೋಣ ಅಂತ ತೀರ್ಮಾನಿನಿಸಿಬಿಟ್ಟೆ. ನಮ್ಮ ಅಪ್ಪ ಎರಡು ಕಟ್ಟೆ ತೆಗೆದಿದ್ದ, ಅದು ಮುಚ್ಚಿಹೋಯ್ತು. ಯಾವನೋ ಒಬ್ಬ ಇನ್ನೂ ಕೆರೆಕಟ್ಟೆ ಕೆಲಸ ಅವನ ಮಗ ಮಾಡ್ತಾನೆ ಅಂತ ಲೇವಡಿ ಮಾಡಿದ. ಹಠ ಸಾಧನೆ ಮಾಡಿದೆ. 30 ವರ್ಷದಿಂದ ಧರ್ಮಕಾರ್ಯ ಮಾಡುತ್ತಿದ್ದೇನೆ. ವಸಂತಕಾಲದಲ್ಲಿ ಕಾಡೆಲ್ಲ ಹಸಿರಾಗಿ ವನ್ಯಪ್ರಾಣಿಗಳು ಬೆಟ್ಟದಲ್ಲಿ ವಿಹರಿಸುತ್ತಿದ್ದರೆ, ಆ ಮರ ಈ ಮರ ಹಿಡಕೊಂಡು ಕುರಿ ಮೇಯಿಸುತ್ತಾ ನಡೆಯುತ್ತಿದ್ದರೆ ಸಂತೋಷವಾಗುತ್ತದೆ" ಎನ್ನುತ್ತಾರೆ ಕಾಮೇಗೌಡ.
ಜೀವಬೆದರಿಕೆ : ಇಂತಹ ಅಪರೂಪದ ಬೆಟ್ಟದ ಜೀವ ಕಾಮೇಗೌಡರಿಗೂ ಖಳನಾಯಕರ ಕಾಟ ತಪ್ಪಿಲ್ಲ.ಕೆರೆಯ ಬಳಿ ಶೇಖರಣೆಯಾಗುವ ಮರಳು ಬಗೆಯಲು ಬರುವ ಲೂಟಿಕೋರರು,ಕಾಡಿನ ಮರ ಕಡಿಯಲು ಬರುವ ಮರಗಳ್ಳರು ಜೀವ ಬೆದರಿಕೆ ಒಡ್ಡುತ್ತಲೇ ಇರುತ್ತಾರೆ. ಇದರಿಂದ ಭಯಭೀತರಾಗಿರುವ ಕಾಮೇಗೌಡರು ಈ ಸಂಬಂಧ ಮಳವಳ್ಳಿ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.ಇಂತಹ ಬೆಟ್ಟದ ಜೀವಗಳನ್ನು ಕಾಪಾಡಿಕೊಳ್ಳಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ ಎಂದು ಜನ ಅರಿತುಕೊಳ್ಳಬೇಕು.ಆಗ ಮಾತ್ರ ನಾಗರಿಕತೆಗೂ ಘನತೆ ಬರುತ್ತದೆ.
ಹೃದಯ ಕಲ್ಲು ಬಂಡೆಯಾಗಬೇಕು: ಇಂತಹ ಧರ್ಮಕಾರ್ಯಗಳನ್ನು ಮಾಡಬೇಕಾದರೆ ಮೊದಲು ಹೃದಯ ಕಲ್ಲುಬಂಡೆಯಂತಾಗಬೇಕು.ನಾನು, ನನ್ನದು,ನನ್ನವರು ಎಂಬ ಭಾವನೆ ಬಿಡಬೇಕು ಎನ್ನುತ್ತಾರೆ ಕಾಮೇಗೌಡ. ಬದುಕಿನ ಬೇಗೆಯಲ್ಲಿ ಬೆಂದು,ಸಾವಿನ ಕದವನ್ನು ತಟ್ಟಿ ಬದುಕಿಬಂದಿರುವ ಕಾಮೇಗೌಡರ ಜೀವನಪಯಣ ಅತ್ಯಂತ ಕಠಿಣವಾದದ್ದು.ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ತಾವೊಬ್ಬರೆ ಎತ್ತಿ,ಬೆಟ್ಟದ ತುದಿಯವರೆಗೂ ನಡೆದು ಕೆರೆಕಟ್ಟೆ ಕಟ್ಟಿದ್ದಾರೆ.ಬೇಕಾದಾಗ ಜೆಸಿಬಿ ಬಳಸಿಕೊಂಡಿದ್ದಾರೆ.ಅದಕ್ಕಾಗಿ ಕೈಯಿಂದ ಐದಾರು ಲಕ್ಷ ರೂಪಾಯಿ ಹಣಕೊಟ್ಟಿದ್ದಾರೆ.
ಸತ್ತಾಗ ಈ ದೇಹ ಬೆಂಕಿಗೆ ಆಹುತಿಯಾಗುತ್ತದೆ.ಅದಕ್ಕಾಗಿ ಜೀವನವನ್ನು ವ್ಯರ್ಥವಾಗಿ ಕಳೆದುಬಿಡಬಾರದು. ವಿವೇಕದಿಂದ ಬಾಳಬೇಕು ಎಂಬ ಕಾಮೇಗೌಡರು ಲೋಕಮೆಚ್ಚುವ ಕೆಲಸಮಾಡಿದ್ದರೂ ` ಈ ನರಜನ್ಮದಲ್ಲಿ ಯಾವುದನ್ನು ಕಳೆಯೋಣ,ಯಾವುದನ್ನು ಬಿಡೋಣ ಎನ್ನುವುದು ಇಂದಿಗೂ ಗೊತ್ತಾಗುತ್ತಿಲ್ಲ' ಎನ್ನುತ್ತಾರೆ. ವನ್ಯಪ್ರಾಣಿಗಳು ತನ್ನ ಬಳಗ ಅಂತ ಆದಮೇಲೆ ಅವುಗಳ ಕಷ್ಟ ನಿವಾರಣೆ ಮಾಡಬೇಕಾದದ್ದು ನನ್ನ ಕರ್ತವ್ಯ ಅದಕ್ಕಾಗಿ ಕೆರೆಕಟ್ಟೆ ನಿಮರ್ಾಣಮಾಡುವ ಪುಣ್ಯಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.
ಕೋಟಿ ಕೋಟಿ ಹಣ ಸಂಪಾದಿಸಿದರು ಅದು ಶಾಶ್ವತ ಅಲ್ಲ, ಕೀರ್ತಿ ಮಾತ್ರ ಶಾಶ್ವತ.ಅದಕ್ಕಾಗಿ ಮಗನಿಗೊಂದು,ಮಮ್ಮೊಗನಿಗೊಂದು,ಆ ಮಗನಿಗೆ,ಈ ಮಗನಿಗೆ ಅಂತ ಕೆರೆಕಟ್ಟೆ ಕಟ್ಟುತ್ತಾ ಹೋದೆ.ಪ್ರತಿಯೊಬ್ಬರಿಗೂ ಒಂದೊಂದು ಕೆರೆ ಕಟ್ಟಿದ್ದೇನೆ. ಅದೆಲ್ಲ ಸರ್ಕಾರಿ ಜಾಗದಲ್ಲಿ ಕಟ್ಟಿರುವ ಕೆರೆಗಳು.ಯಾಕೆಂದರೆ ಆ ಕೆರೆಗಳನ್ನು ಯಾರು ಮಾರಬಾರದು ಮತ್ತು ಮುಚ್ಚಬಾರದು.ಸ್ಥಿರವಾಗಿರಬೇಕು, ಇದು ಧರ್ಮ ಎನ್ನುತ್ತಾರೆ.
ಇಬ್ಬರು ರಾಜಕಾರಣಿಗಳ ಬಳಿ ಇರುವ ಹಣದಿಂದ ಇಡೀ ಮಂಡ್ಯ ಜಿಲ್ಲೆಯನ್ನೇ ಬೆಳಕುಮಾಡಿಬಿಡಬಹುದು.ಆದರೆ ಅದು ಆಗುತ್ತಿಲ್ಲ.ಈ ಕಾಮೇಗೌಡನ ಆಸೆ ಕರ್ನಾಟಕವನ್ನೆ ಕೈಯಲ್ಲಿ ಎತ್ತಿ ಹಿಡಿದು ಬೆಳಗಿಬಿಡಬೇಕು ಅನಿಸುತ್ತದೆ. ಆದರೆ ಅದು ನನ್ನಿಂದಾಗದ ಕೆಲಸ. ಮಾತನಾಡುವುದು ಸುಲಭ,ಮಾಡುವುದು ಕಷ್ಟ ಎಂದು ಹೇಳುವ ಮೂಲಕ ಪರಿಸರ ಉಳಿಸಿ ಎಂದು ಕೂಗು ಹಾಕುವ,ಚಳವಳಿ,ಹೋರಾಟ ಮಾಡುವ `ಪರಿಸರಪ್ರೇಮಿ' ಗಳು ನಾಚುವಂತೆ ಮಾಡುತ್ತಾರೆ.
ಕಾಡಿಗೆ ಬೆಂಕಿ ಬೀಳದಂತೆ,ಕಾಡು ತಂಪಾಗಿರುವಂತೆ ನೋಡಿಕೊಳ್ಳಬೇಕು.ವನ್ಯಪ್ರಾಣಿಗಳಿಗೆ ಸಾಕಷ್ಟು ನೀರು ನೆರಳು ಸಿಗುವಂತೆ ಮಾಡಬೇಕಾದದ್ದು ಅರಣ್ಯ ಅಧಿಕಾರಿಗಳ ಕೆಲಸ.ಇಂತಹ ಪ್ರಾಮಾಣಿಕ ಅಧಿಕಾರಿಗಳು ನಮಗೆ ಬೇಕು.ಹಣದ ಆಮಿಷಕ್ಕೆ ಬಲಿಯಾಗಿ ಕಾಡಿನ ಸಂಪತ್ತನ್ನೇ ಲೂಟಿಮಾಡುವ ಅಧಿಕಾರಿಗಳು,ರಾಜಕಾರಣಿಗಳಿಂದ ಪರಿಸರ ಹಾಳಾಗುತ್ತಿದೆ. ಆಸೆ ಇಲ್ಲದೆ ಜಗತ್ತಿಲ್ಲ.ಆದರೆ ಮಾನವನಿಗೆ ದುರಾಸೆ ಇರಬಾರದು. ಈ ಕಾಡು ಮತ್ತು ವನ್ಯಪ್ರಾಣಿಗಳೆ ನನ್ನ ಸಂಪತ್ತು ಎನ್ನುತ್ತಾರೆ. ಇಂತಹ ಬೆಟ್ಟದಜೀವಗಳು ಎಲ್ಲಾಕಡೆ ತಣ್ಣಗಿದ್ದು ನೂರ್ಕಾಲ ಬಾಳಲಿ.ಉರಿಯುತ್ತಿರುವ ಭೂಮಿ ತಂಪಾಗುವ ಪುಣ್ಯಕಾರ್ಯ ಮಾಡಲಿ ಎನ್ನುವುದು ನಮ್ಮ ಆಶಯ 




ಹೀಗಾಗಿ ಲೇಖನಗಳು

ಎಲ್ಲಾ ಲೇಖನಗಳು ಆಗಿದೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/10/blog-post_50.html

Subscribe to receive free email updates:

0 Response to " "

ಕಾಮೆಂಟ್‌‌ ಪೋಸ್ಟ್‌ ಮಾಡಿ