ಶೀರ್ಷಿಕೆ : ಬಾಲಕ ಕಾಣೆ : ಅಪಹರಣ ಶಂಕೆ
ಲಿಂಕ್ : ಬಾಲಕ ಕಾಣೆ : ಅಪಹರಣ ಶಂಕೆ
ಬಾಲಕ ಕಾಣೆ : ಅಪಹರಣ ಶಂಕೆ
ಕೊಪ್ಪಳ ಆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೂದಗುಂಪಾ ಗ್ರಾಮದ ನಿವಾಸಿ ಸಂತೋಷ (15) ತಂದೆ ಹನುಮಂತಪ್ಪ ಮಡಿವಾಳರ ಎಂಬ ಬಾಲಕ ಜೂನ್. 23 ರಂದು ಕಾಣೆಯಾಗಿದ್ದು, ಬಾಲಕನ್ನು ಅಪಹರಣ ಮಾಡಿರುವ ಸಾಧ್ಯತೆಗಳಿದ್ದು, ಬಾಲಕನ ಪತ್ತೆಗೆ ಸಹಕರಿಸುವಂತೆ ಯಲಬುರ್ಗಾ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಂತೋಷ ತಂದೆ ಹನುಮಂತಪ್ಪ ಮಡಿವಾಳರ (15) ಎಂಬ ಬಾಲಕ ಜೂನ್. 23 ರಂದು ಸಂಜೆ 4-00 ಗಂಟೆ ಸುಮಾರಿಗೆ ಊರಿಗೆ ಹೋಗಿ ಬರುತ್ತೇನೆ ಎಂಬುದಾಗಿ ಹೇಳಿ ಹೋಗಿದ್ದು, ತಮ್ಮ ಸಂಬಂಧಿಕರ ಮನೆಗೆ ಹೋಗದೇ ವಾಪಸ್ ಮನೆಗೂ ಬಾರದೆ ಕಾಣೆಯಾಗಿದ್ದಾನೆ. ಕಾಣೆಯಾದ ಬಾಲಕನ ಚಹರೆ ವಿವರ ಇಂತಿದೆ, ಸಂತೋಷ ತಂದೆ ಹನುಮಂತಪ್ಪ ಮಡಿವಾಳರ (15), ಎತ್ತರ 4 ಫೀಟ್, ಸಾಧಾರಣ ಮೈಕಟ್ಟು, ದುಂಡು ಮುಖ, ಸಾದಾಗೆಪ್ಪು ಮೈಬಣ್ಣ, ಕಾಣೆಯಾದಾಗ ನೀಲಿ ಮತ್ತು ಹರಿಸಿಣ ಬಣ್ಣದ ಡಿಸೈನಿನ ಆಪ್ ಶರ್ಟ ಮತ್ತು ಖಾಕಿ ಬಣ್ಣದ ಪ್ಯಾಂಟ್ ಧರಿಸಿದ್ದು, ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾನೆ.
ಈ ಬಾಲಕನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ 08539-230111, ಡಿ.ಎಸ್.ಪಿ 08539-230432, ಸಿ.ಪಿ.ಐ ಯಲಬುರ್ಗಾ ವೃತ್ತರವರ ಕಛೇರಿ 08534-220133, 9480803733, ಯಲಬುರ್ಗಾ ಪೊಲೀಸ್ 08534-220133, 9480803749 ಹಾಗೂ ಜಿಲ್ಲಾ ನಿಸ್ತಂತು ಕೇಂದ್ರ 08539-230100, ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಬಾಲಕ ಕಾಣೆ : ಅಪಹರಣ ಶಂಕೆ
ಎಲ್ಲಾ ಲೇಖನಗಳು ಆಗಿದೆ ಬಾಲಕ ಕಾಣೆ : ಅಪಹರಣ ಶಂಕೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲಕ ಕಾಣೆ : ಅಪಹರಣ ಶಂಕೆ ಲಿಂಕ್ ವಿಳಾಸ https://dekalungi.blogspot.com/2017/08/blog-post_39.html
0 Response to "ಬಾಲಕ ಕಾಣೆ : ಅಪಹರಣ ಶಂಕೆ"
ಕಾಮೆಂಟ್ ಪೋಸ್ಟ್ ಮಾಡಿ